ಮಾನಸ ಆರ್ಟ್ಸ್ ಲಾಂಛನದಡಿಯಲ್ಲಿ ಡಾ|| ಅಶೋಕ್ಪೈ ನಿರ್ಮಿಸಿರುವ ಮುಂದಿನ ಚಿತ್ರ ಮನಮಂಥನ ಚಿತ್ರವನ್ನು ಸೆನ್ಸಾರ್ನವರು ವೀಕ್ಷಿಸಿ ಸಾರ್ವಜನಿಕ ಪ್ರದರ್ಶನಕ್ಕೆ ಯೋಗ್ಯವಾದ ಯು ಸರ್ಟಿಫಿಕೇಟ್ ನೀಡಿದ್ದಾರೆ.
ಚಿತ್ರವು ಎಲ್ಲಾ ವರ್ಗದ ಜನರನ್ನು ರಂಜಿಸಲಿದೆ. ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಚಿತ್ರವು ಇಷ್ಟವಾಗಲಿದ್ದು, ಚಿತ್ರದಲ್ಲಿ ರಮೇಶ್ ಭಟ್ ರ ಚಿತ್ರರಂಗ ಜೀವನದ ಅತ್ಯುತ್ತಮ ಪಾತ್ರ ಇದಾಗಿದೆ ಎಂದು ಈಗಾಗಲೇ ಮಾತು ಕೇಳಿಬರುತ್ತಿದೆ.
ಚಿತ್ರಕ್ಕೆ ಡಾ. ಕೆ.ಎ. ಅಶೋಕ್ ಪೈ ಕಥೆ, ಪಿ. ರಾಜನ್ ಛಾಯಾಗ್ರಹಣ, ಪ್ರವೀಣ್ ಡಿ.ರಾವ್ ಸಂಗೀತ, ಎಂ.ಎನ್. ಸ್ವಾಮಿ ಸಂಕಲನವಿದ್ದು, ಚಿತ್ರ ಕಥೆ, ಸಾಹಿತ್ಯ ಸಂಭಾಷಣೆ, ನಿರ್ದೇಶನ ಸುರೇಶ್ ಹೆಬ್ಳಿಕರ್.
ತಾರಾಗಣದಲ್ಲಿ ಸುರೇಶ್ ಹೆಬ್ಳಿಕರ್, ರಮೇಶ್ ಭಟ್, ಕಿರಣ್ ರಜಪೂತ್, ಅರ್ಪಿತಾ, ಸಂಗೀತ, ಸುಮನ್, ಶ್ರೀಧರ್, ಲಕ್ಷ್ಮೀ ಗೋಪಿನಾಥ್ ಹಾಗೂ ...ರೆ ಚಿತ್ರದಲ್ಲಿ ನಟಿಸಿರುವ ಸುಮನ್ ಈ ಚಿತ್ರದಲ್ಲಿ ಮನೋವೈದ್ಯೆಯಾಗಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.